ಶನಿವಾರ, ಡಿಸೆಂಬರ್ 17, 2011

ಅರಸಿ..ಅರಸಿ.. ಮನದರಸಿಯನ್ನರಸಿ....♥



ಹಿಂದಿನ ಭಾಗಕ್ಕಾಗಿ ಈ ಕೊಂಡಿ ಕ್ಲಿಕ್ಕಿಸಿ:  http://bisilubeladinagalahudugi.blogspot.com/2011/12/blog-post.html


"ರಳಿದ ಕುಸುಮವು ಪರಿಮಳ ಬೀರುವಂತೆ..
ಅರಳಿದ ನವಿರುಭಾವಗಳು ಸುಮ್ಮನಿರುವವೇ..??
ಖಾಲಿ ಖಾಲಿ ಮನಸಿಗೆ ನೂರು ನೂರು ಕನಸುಗಳು
ತುಂಬಿಕೊಳ್ಳತೊಡಗುತ್ತವೆ..
ಆಗಲೇ ವಿಚಾರ ಲಹರಿವೂ ಅಲೆ-ಅಲೆಯಾಗಿ ಮನದ ದಡಕ್ಕೆ ಅಪ್ಪಳಿಸುತ್ತವೆ."

ಶಿವುನ ವಿಚಾರದಲ್ಲೂ ಹೀಗೆ ಆಯಿತು.. (ಆಗಲೇ ಬೇಕಲ್ಲ)
ಹಾಗೇ ಒಂದು ದಿನ ತನ್ನ ಮನಸಲ್ಲಿ ಆಲೋಚಿಸತೊಡಗಿದನು..
"ನನ್ನ 'ಬಾಳ ಸಂಗಾತಿ'ಯನ್ನು ನಾನು ಹೇಗೆ ಆಯ್ಕೆಮಾಡಿಕೊಳ್ಳಬೇಕು..??
'ಒಂದು ವೇಳೆ ನಾನು ಹುಡುಗಿ ನೋಡೋದಿಕ್ಕೆ ಅಂತಾ ಹೋದ್ರೆ,

ಬರೀ ಅವಳ ಮುಖ ನೋಡಿದರೆ ಸಾಕೆ..??
ಅವಳು ನನ್ನ ಜೊತೆ ಹೇಗೆ ಹೊಂದಿಕೊಳ್ಳುತ್ತಾಳೋ ಏನೋ..??
ನನ್ನ ಹಾಗೇ ಸರಳವಾಗಿರದೇ ನನಗೆ ಅದು ಬೇಕು, 
ಇದು ಬೇಕು ಎಂದು ಆಡಂಬರದ ಬದುಕು ಅವಳದಾದರೇನು ಮಾಡುವುದು..??
ಮೊದಲೇ ನಾನು 'ಬದುಕಲು ಢವ ಢವ ಎಂದು ಎದೆ ಹೊಡೆದುಕೊಳ್ಳುವಷ್ಟು
ಬಡವ' ದಿನನಿತ್ಯ ದುಡಿದರೇನೆ ಊಟ ನಮ್ಮದು ಅಂತಾದ್ರಲ್ಲಿ,
ನಾ ದುಡಿದ್ದದ್ದೆಲ್ಲಾ ಅವಳು ಹ್ಯಾಗ್ಯಾಗೋ ಖರ್ಚು ಮಾಡುವವಳಾದರೇನು
ಮಾಡುವುದು..???
ಆಗ ನನ್ನ ಜೀವನ ಸುಖಮಯವಾಗದೇ., ನರಕವಾಗಿಬಿಟ್ಟರೇ...??' :o
ಜೀವನದಲ್ಲಿ ಒಮ್ಮೆ ಮಾತ್ರ ಮದುವೆ ಆಗೋದು ಅದ್ಕೇ ನಿಧಾನಕ್ಕೆ,
ತಾಳ್ಮೆಯಿಂದ ಪರೀಕ್ಷಿಸಿ ಹೆಣ್ಣನ್ನು ಒಪ್ಪಿಕೊಳ್ಳಬೇಕೆಂದುಕೊಂಡನು..!"
ಆದ್ರೆ,, 'ಪರೀಕ್ಶಿಸುವ ವಿಧಾನಗಳು ಬೇಕಲ್ಲವೇ..? ಅವನ್ನೆಲ್ಲಿಂದ ಕಂಡುಹಿಡಿಯೋದು..?
ನೋಡೋಣ..!!' ಇನ್ನೂ ನಂಗೆ ವಯಸ್ಸು ಚಿಕ್ಕದು ಇನ್ನೂ 2-3 ವರ್ಷದೊಳಗೆ ಅದಕ್ಕೆಲ್ಲಾ ಉತ್ತರ ಕಂಡುಕೊಂರಾಯ್ತು ಎಂದು ಸುಮ್ಮನಾದನು..


ನದಲ್ಲಿ ಆಲೋಚನೆ ಮೊಳಕೆಯೊಡೆದರೆ ಸುಮ್ಮನಿರುತ್ತದೆಯೇ..??
ಸುಪ್ತಮನಸು ಅದರ ಬಗ್ಗೆ ಸದಾ ಜಾಗೃತವಾಗೇ ಇರುತ್ತೇ.
ನಮ್ಮ ನಮ್ಮ ಕೆಲಸದಲ್ಲಿ ಮುಳುಗಿದ್ದರೂ ಅದು ಬಿಡದು... 
ಮದುವೆಯಾಗೋ ಹುಡುಗಿಯ ಬಗೆಗಿನ ವಿಚಾರ 
'ಮರಕುಟಿಗ'ನ ಹಾಗೇ ಸದಾ ಇವನ ತಲೆಯಲ್ಲಿ  ಕೊರೀತಾನೇ ಇತ್ತು..

ಆಗಾಗ ಕೆಲವು ಮಾತುಗಳೂ ಇವನ ಗಮನದಲ್ಲಿ ಹಾದು ಹೋಗಿದ್ದವು
"ಕುಲ ನೋಡಿ ಹೆಣ್ಣು ತರಬೇಕು,, ಜಲ ಶೋಧಿಸಿ ನೀರು ತರಬೇಕು.."
"ಒಂದು ಒಳ್ಳೆ ಹೆಣ್ಣು ಹುಡುಕಬೇಕಾದ್ರೆ 3 ಜೋಡು ಮೆಟ್ಟು ಹರಿತ್ತಿದ್ವಂತೆ"
ಹೀಗೆ ಇಷ್ಟೊಂದು ಕಷ್ಟವೇ ಹೆಣ್ಣು ಹುಡುಕೋದು ಎಂದು ಆಶ್ಚರ್ಯಚಕಿತನಾಗಿದ್ದನು.


ಹೀಗಿರಲೊಂದು ದಿನ ಅವನು ಎಂದೋ ಓದಿದ ಒಂದು ಪುಸ್ತಕದಲ್ಲಿನ ಕಥೆ ನೆನಪಾಯ್ತು..!
ಆ ಕಥೆಯಲ್ಲಿ ಒಬ್ಬ ವ್ಯಕ್ತಿ ತನ್ನ ಮನೆ, ಕುಟುಂಬ ವನ್ನು ಸರಿಯಾಗಿ ನೋಡಿಕೊಳ್ಳುವ ವಧುವನ್ನು ಅರಸಿ.
ಒಂದು ಸೇರು ಭತ್ತವನ್ನ ಒಂದು ಬಟ್ಟೆಯಲ್ಲಿ ಗಂಟು ಕಟ್ಟಿಕೊಂಡು ಕನ್ಯಾನ್ವೇಷಣೆಗಾಗಿ ಪ್ರಯಾಣ ಬೆಳೆಸುತ್ತಾನೆ..!
ಅವನು  ಹೋಗುವ ಪ್ರತಿ ಮನೆಯಲ್ಲೂ ಅವನದು ಒಂದೇ ಷರತ್ತು..
"ತಾನು ತಂದಿರುವ ಈ ಒಂದು ಸೇರು ಭತ್ತದಲ್ಲೇ ಊಟಕ್ಕೆ ಬೇಕಾದ ಎಲ್ಲಾ ಸಿದ್ಧತೆಯನ್ನೂ ಮಾಡಿ ಈತನಿಗೆ ಊಟಕ್ಕೆ ಬಡಿಸಬೇಕಾಗಿತ್ತು, ಅದರ ಮಿಕ್ಕಿ ಒಂದು ನಯಾ ಪೈಸೆ ಬೇರೆಕಡೆಯಿಂದ ಪಡೀಬಾರದು.."
ಈತ ಹೋದಕಡೆಯಲ್ಲೆಲ್ಲಾ ಎಲ್ಲಾ ಹೆಣ್ಣುಮಕ್ಕಳು 'ಅದಾಗದ ಮಾತೆಂದೇ' ಕಳಿಸಿಬಿಡುತ್ತಿದ್ದರು..!
ಕೆಲವು ಕಡೆ ಇವನೂ ಅಪಹಾಸ್ಯಕ್ಕೂ ಗುರಿಯಾದನು,.
"ಅಲ್ಲಾ..! ಬರೀ ಭತ್ತ ಕೊಟ್ಟು,, ಇವನು ತನ್ನ ಊಟಕ್ಕೆ ಬೇಕಾದ ಅನ್ನ , ಸಾರು,, ಪಲ್ಯ, ಮೊಸರು, ಎಲ್ಲಿಂದ ತರಬೇಕೆಪ್ಪಾ..? ಇವನಿಗೆ ಆ ಜನ್ಮದಲ್ಲಿ ಮದುವೆನೇ ಆಗಲ್ಲ" ಎಂದು ಗೇಲಿ ಮಾಡಿದರು..
ಆದರೂ ಇವನು ತನ್ನ ಪ್ರಯತ್ನ ಬಿಡಲಿಲ್ಲ,,


ಕೊನೆಗೆ ಒಂದು ಊರಲ್ಲಿ 'ಸುಮತಿ' ಎನ್ನೋ ಹುಡುಗಿ ಇವನ ಷರತ್ತುಗಳಿಗೆ ಒಪ್ಪಿ ಅಡುಗೆ ಮಾಡಿ ಬಡಿಸುವದಾಗಿ ಒಪ್ಪಿಕೊಂಡಳು, ಇವನಿಗೆ ಸಂತಸವಾಗಿ ಹುಡುಗಿಯ ತಂದೆಯ ಕೋರಿಕೆಯ ಮೇರೆಗೆ ಅವರ ಮನೆಗೆ ಹೋಗಿ ಮತ್ತೊಮ್ಮೆ ಆ ಹುಡುಗಿಗೆ ಎಲ್ಲವನ್ನೂ ವಿವರಿಸಿದನು, ಅವಳೂ ಅಷ್ಟೇ "ಸರಿ ನೀವು ಮಧ್ಯಾಹ್ನ ಊಟದ ಸಮಯಕ್ಕೆ ಸರಿಯಾಗಿ ಬಂದು ಬಿಡಿ ಎಂದು ಹೇಳಿ ಅಡುಗೆ ಸಿದ್ಧತೆ ಮಾಡಲು ಹೋದಳು..!" ಇವನು ಹೊರಟು ಮಧ್ಯಾಹ್ನ ಸಮಯಕ್ಕೆ ಸರಿಯಾಗಿ ಊಟಕ್ಕೆ ಬಂದನು.
ಇವಳು ತನ್ನ ಮಾತಿನಂತೆ ಅನ್ನ. ಸಾರು, ಪಲ್ಯ, ಮೊಸರು ಸಿದ್ಧಪಡಿಸಿ ಇಟ್ಟಿದ್ದಳು, ಅವನು ಊಟವೆಲ್ಲಾ ಮಾಡಿದನು, ಊಟವೂ ಒಳ್ಲೆ ರುಚಿಕರವಾಗಿತ್ತು,,! 
ಊಟವಾದ ಮೇಲೆ ಇವನು ಅವಳನ್ನು ಕೇಳುತ್ತಾನೆ,
ಅಲ್ಲಾ ರೀ ..! "ನಾನು ಎಷ್ಟೋ ಕಡೆ ಕೇಳಿದರೂ ಮಾಡೋಕೆ ಆಗೋದೆ ಇಲ್ಲ ಎಂದೇ ಎಲ್ರೂ ನನ್ನ ವಾಪಾಸು ಕಳಿಸಿದರು, ನೀವು ಇದನ್ನ ಹ್ಯಾಗೇ ಮಾಡಿದ್ರಿ" ಎಂದು ಕೇಳುತ್ತಾನೆ.
ಅದಕ್ಕೆ ಅವಳು ಹೇಳುತ್ತಾಳೆ "ನೀವು ಕೊಟ್ಟ ಭತ್ತವನ್ನು ಮೊದಲು ಕುಟ್ಟಿದೆನು. ಅದರಲ್ಲಿ ಅಕ್ಕಿ.., ನುಚ್ಚಕ್ಕಿ.., ತೌಡು (ಭತ್ತದ ಹೊಟ್ಟು) ಬಂದವು, ಅದನ್ನು ಚಪ್ಪರಿಸಿ, ಅಕ್ಕಿ ಮತ್ತು ನುಚ್ಚು, ಭತ್ತದ ತೌಡು ಬೇರೆ ಮಾಡಿದೆನು. ಅಕ್ಕಿನಾ ತೊಳೆದು ಅನ್ನಕ್ಕೆ ಇಟ್ಟೆ, ತೌಡು ತೆಗೆದುಕೊಂಡು ಹೋಗಿ ನಮ್ಮ ಪಕ್ಕದ ಮನೆಯ ಹಸುವಿಗೆ ಕೊಟ್ಟೆ ಆ ಮನೆಯವರು ಅದಕ್ಕೆ ಬದಲಾಗಿ ಮೊಸರನ್ನು ಕೊಟ್ಟರು. ಇನ್ನು ನುಚ್ಚು ಅದನ್ನು ನಮ್ಮ ಊರಿನ ಶೆಟ್ರು ಅಂಗಡಿ ಹೋಗಿ ಮಾರಿದೆ.
(ಇಲ್ಲಿನ ಎಲ್ಲಾ ಚಿತ್ರಗಳ ಕೃಪೆ Google ನಿಂದ)
ಆತ ಕೊಟ್ಟ ಹಣದಲ್ಲಿ ಅವನ ಬಳಿಯೇ ಸಾರಿಗೆ ಬೇಕಾದ ಪದಾರ್ಥಕೊಂಡು, ಹಾಗೇ ಬರುವಾಗ ಮಾರುಕಟ್ಟೆಯಲ್ಲಿ ಮಿಕ್ಕಿದ ಹಣದಲ್ಲಿ ಎಲ್ಲಾ ತರಕಾರಿ ತಂದು ಪಲ್ಯಮಾಡಿದೆ ಅಷ್ಟೇ"ಎಂದಳು..! ..!
ಈಗ ಅವನಿಗೆ ತುಂಬಾ ಸಂತಸವಾಯಿತು,,! ಒಂದು ಪದಾರ್ಥವನ್ನು ಹಲವು ಮಾದರಿಯಲ್ಲಿ ಬಳಸಿ ಸ್ವಲ್ಪ ಕೂಡ ವ್ಯರ್ಥ ಮಾಡದೇ ಸರಿಯಾಗಿ ನಿಭಾಯಿಸಿದಳು ಇವಳು ತನ್ನ ಬದುಕನ್ನು ನಡೆಸಲು ಸಮರ್ಥಳೆಂದು ನಿರ್ಧರಿಸಿದನು
ಮುಂದೆ ಸರಳ ರೀತಿಯಲ್ಲಿ ಗುರು-ಹಿರಿಯರ ಸಮ್ಮುಖದಲ್ಲಿ  ಅವರಿಬ್ಬರ ವಿವಾಹವೂ ಜರುಗುತ್ತದೆ..!"


ಬ್ಬಾಬ್ಬಬ್ಬಬ್ಬ್ಬ..!! ಮದುವೆಗೆ ಇಷ್ಟೆಲ್ಲಾ ದೊಡ್ಡ ಕಥೆ ಇದೇಯಾ ಅಂತಾ ಅನ್ಕೊಂಡು ಹಾಗೇ  ನೆನಪಿನಿಂದ ವಾಸ್ತವಕ್ಕೆ ಬಂದ ಶಿವು ಮನಸಾರೆನಕ್ಕು ಬಿಟ್ಟನು..!:)


ಮುಂದುವರಿಯುವುದು.........


ನಿಮ್ಮ ಟೀಕೆ-ಟಿಪ್ಪಣೆ (Comment) ಹಾಕೋದ್ ಮರೀಯೋದಿಲ್ಲ ತಾನೇ..??
ಮತ್ತೆ...??? ಬೇಗ ನಿಮ್ಮ ಮನದಭಿಪ್ರಾಯವನ್ನಿಲ್ಲಿ ಮೂಡಿಸಿಬಿಡಿ..! :)
ಮತ್ತೆ ಭೇಟಿಯಾಗೋಣ...?
ನಿಮ್ಮವ ♥ ♥ 
ಸವಿನೆನಪುಗಳು..!


ಸೋಮವಾರ, ಡಿಸೆಂಬರ್ 5, 2011

ಜೀವನವೇ ಸುಖ ಪಯಣ....??



ಆರಂಭಿಕ ಲೇಖನಕ್ಕಾಗಿ ಈ ಕೊಂಡಿ ಕ್ಲಿಕ್ಕಿಸಿ: http://bisilubeladinagalahudugi.blogspot.com/2011/11/blog-post.html


ಒಂದಾನೊಂದು ಕಾಲದಲ್ಲಿ....!! 
ವಿಜಯನಗರವೆಂಬ ಸಾಮ್ರಾಜ್ಯದಲ್ಲಿ..!! 
ಹ್ಮ್ಮ್..!! ಹ್ಹ ಹ್ಹ ಯಾಕೋ ಇದು ಸ್ವಲ್ಪ ಅತಿಯಾಯ್ತು ಅನಿಸುತ್ತೇ ಅಲ್ವೇ,,?? 
ಬೇಡಬಿಡಿ..! ಅಷ್ಟು ಹಿಂದಕ್ಕೆ ಹೋಗೋದೇನೂ ಬೇಡ..!


ಸುಮಾರು 8 ವರ್ಷಗಳ ಹಿಂದೆ 'ವಿಜಯನಗರ' ಎಂಬ ನಗರದಲ್ಲಿ.

ಶಿವು ಎಂಬ ಯುವಕನಿದ್ದನು.!
ಸದ್ಯ ತನ್ನ ಇಬ್ಬರ ತಮ್ಮಂದಿರು., ತಂದೆ ತಾಯಿಯೊಂದಿಗೆ .. 
ಕಷ್ಟಪಟ್ಟು Lease ಹಾಕಿಸಿಕೊಂಡಿರುವ ಮನೆಯಲ್ಲಿ ವಾಸವಾಗಿದ್ದನು...! 
ಇದ್ದ ಒಬ್ಬ ಅಕ್ಕನನ್ನು ಅದಾಗಲೇ 'ಮದುವೆ' ಮಾಡಿಕೊಟ್ಟಾಗಿತ್ತು..!


ವರ ಮನೆಯವು  12 ಜನರ ತುಂಬು ಕುಟುಂಬವಾಗಿದ್ದರೂ ಮನೆಯಲ್ಲಿ ಕಿತ್ತು ತಿನ್ನುವ ಬಡತನದ ಕಾರಣ ಕೆಲವರು ನಯವಾಗಿ ಜಾರಿಕೊಳ್ಳುತ್ತ ಕುಂಟುಂಬದಿಂದ ದೂರವಾಗುಳಿದಿದ್ದರು.
ಸದ್ಯಕ್ಕೀಗ ಮನೆಯಲ್ಲಿರುವುದೀ 5 ಜನ ಮಾತ್ರ., 
ತಂದೆಗೆ ಸ್ವಲ್ಪ ಅನಾರೋಗ್ಯದ ಕಾರಣ ಮನೆಯಲ್ಲೇ ಇರುತ್ತಿದ್ದರು. 
ಅವರಿಗೆ ಬಿಸಿಲೆಂದರಾಗದು,, 
ಇನ್ನು ತಾಯಿ ಮನೆಕೆಲಸ ಮಾಡುವದರಲ್ಲೇ ಸುಸ್ತಾಗಿರುತ್ತಾರೆ.!
ತಮ್ಮನೊಬ್ಬ ರೂ.೬೦೦ ರ ತಿಂಗಳ ಸಂಬಳಕ್ಕೆ ಅಂಗಡಿಕೆಲಸಕ್ಕೆ ಹೋಗುತ್ತಿದ್ದನು, 
ಇನ್ನೊಬ್ಬ ತಮ್ಮನು  ಸ್ವಲ್ಪ ಮಂದಬುದ್ದಿಯ ಕಾರಣ ಕೆಲಸಕ್ಕೆಲ್ಲೂ ಹೋಗದೇ ಮನೆಯಲ್ಲೇ ಸಣ್ಣಪುಟ್ಟ ಕೆಲಸಮಾಡಿಕೊಂಡು ಇರುತ್ತಿದ್ದನು..!
ಹಾಗಾಗಿ., ಮನೆಯ ಕುಟುಂಬದ ಸಂಪೂರ್ಣ ಹೊಣೆ ಈ 'ಶಿವು' ಮೇಲೆಯೇ..!


ಡತನಕ್ಕೆ ನೂರೆಂಟು ಕಷ್ಟ ಅನ್ನೋ ಹಾಗೆ, ಓದು ತಕ್ಕಮಟ್ಟಿಗೆ ನಡೆದಿತ್ತು, 
'ಓದು ಒಕ್ಕಾಲು.. ಬುದ್ಧಿ ಮುಕ್ಕಾಲು' ಎನ್ನೋ ಸಿದ್ಧಾಂತವನ್ನು ನಂಬಿ ಯಾರಿಗೂ ತೊಂದರೆ ಕೊಡದೆ ಶಕ್ತಿ ಇರುವವರೆಗೂ ಓದಿ, ವ್ಯವಹಾರಕ್ಕೆ ನಿಂತಿದ್ದನು..
ತನ್ನ ತಂದೆಯವರ ಉದ್ಯೋಗವೇಯಾದ 'ಸರ್ಕಾರದ ಲಾಟರಿ ಟಿಕೇಟು ಮಾರಟ'ದ ಕೆಲಸವನ್ನೇ ಇವನು ಮುಂದುವರಿಸಿಕೊಂಡು ಹೊರಟಿದ್ದನು.! 
ಬರೋ ಅಲ್ಪ-ಸ್ವಲ್ಪ ಆದಾಯದಲ್ಲೇ ತೃಪ್ತಿಯಿಂದ ಜೀವನ ನಡೆಸುತ್ತಿದ್ದನು,,
ಕನಸುಗಳು ನೂರಾರಿದ್ದರೂ,, ಎಲ್ಲವನ್ನೂ ಬದಿಗೊತ್ತಿ,, ಸಂಸಾರದ ನೊಗವನ್ನು ಹೊತ್ತು ಸಾಗಿದ್ದನು.


ನ್ನ ಬುದ್ದಿಮತ್ತೆಯಿಂದ ತನ್ನ ವ್ಯವಹಾರದಲ್ಲಿ ಹಂತ-ಹಂತವಾಗಿ ಬೆಳೆಯುತ್ತ ಸಾಗಿದನು,
ಮೊದಲೆಲ್ಲಾ ಬಸ್ ನಿಲ್ದಾಣ.., ಮಾರ್ಕೆಟ್.., ರೈಲ್ವೇ ನಿಲ್ದಾಣ.., ಹೀಗೆ ಜನಸಂದಣಿ ಇರೋಕಡೆಯೆಲ್ಲೆಲ್ಲಾ ಬೀದಿ ಬೀದಿ. ಓಡಾಡಿ ವ್ಯಾಪರ ಮಾಡುತ್ತಿದ್ದ ಇವನು ಸ್ವಲ್ಪ ಆಲೋಚಿಸಿ, ಒಂದು ಪುಟ್ಟ ಅಂಗಡಿ ಮಾಡಿದರೆ ಲೇಸೆಂದು ತಿಳಿದು ನಾಲ್ಕು ಹಾದಿ ಕೂಡುವ ಮಧ್ಯ ಒಂದು ಪೆಟ್ರೋಲ್ ಬಂಕ್ ಬಳಿ 'ಬೀದಿ ಬದಿ'ಯ ಒಳ್ಳೆ ಜಾಗವನ್ನು ನೋಡಿ ಅಲ್ಲಿ ವ್ಯಾಪಾರ ಮಾಡುವದೆಂದು ನಿಶ್ಚಯಿಸಿ
ಆ ಜಾಗಕ್ಕೆ ಹೊಂದುವಂತೆ ಒಂದು Table ಮಾಡಿಸಿ ಒಂದೊಳ್ಳೆ ದಿನ ಶುರು ಮಾಡಿಯೇಬಿಟ್ಟನು.(ರಾತ್ರಿಯಾದರೆ ಆ Table ಸಮೇತ ಮನೆಗೆ ಬರಬೇಕು)


ರಂಭದಲ್ಲಿ  ವ್ಯಾಪಾರ ಅಷ್ಟಾಗಿ ನಡೆಯದಿದ್ದರೂ ಕಾಲ ಕ್ರಮೇಣ ವ್ಯಾಪಾರ ಕುದುರುತ ಬಂದಿತು. 
ನಿಧಾನಕ್ಕೆ  ಜನರೆಲ್ಲಾ ಇವನನ್ನು ಗುರುತಿಸುವಂತಾದರು.
ಇವನ ಮುಖಲಕ್ಷಣ.., ಮಾತಿನ ವೈಖರಿಯೇ ಹಾಗಿತ್ತು,
ಗ್ರಾಹಕರೆಲ್ಲಾ ಇವನ ಮುಖದ ಕಳೆ ನೋಡಿಯೇ ಬರ ಹತ್ತಿದ್ದರು,,
ನಿಷ್ಠೆಯಿಂದ ಕೆಲಸ ಮಾಡಿದರೆ ಯಾವುದೂ ಅಸಾಧ್ಯವಿಲ್ಲವೆಂಬಂತೆ.
ಇವನು ಮಾರಟ ಮಾಡುತ್ತಿದ್ದು ಟಿಕೇಟುಗಳಲ್ಲಿ ದೇವರ ಕೃಪೆಯಿಂದ ಆಗಾಗ 'ಬಹುಮಾನ'ಗಳೂ ಲಭಿಸತೊಡಗಿದವು..
ಗ್ರಾಹಕರೂ ಸಂತುಷ್ಟರಾಗಹತ್ತಿದರೂ,, 
ಹೀಗೆ ಬಾಯಿಂದ ಬಾಯಿಗೆ ಹರಡಿ ಇವನ ಆ 'ಬೀದಿ ಬದಿಯ ಪುಟ್ಟ ಅಂಗಡಿ'
ತಕ್ಕಮಟ್ಟಿಗೆ ಹೆಸರು ಪಡೆಯಿತು.


ವನ ಸನ್ನಡತೆಯಿಂದಾಗಿ ಸುತ್ತಮುತ್ತಲಿನ ಜನರ ಆತ್ಮೀಯ ಸ್ನೇಹವನ್ನೂ., ವಿಶ್ವಾಸವನ್ನೂ ಸಂಪಾದಿಸಿದನು, 
ಈಗ ಸ್ವಲ್ಪ ನೆಮ್ಮದಿಯ ಜೀವನ ಸಾಗ ಹತ್ತಿತು..


ಇಂತಿಪ್ಪ ಜೀವನ ಪಯಣ ಸಾಗಿರಲು ಇವನ ಕನಸುಗಳು ಗರಿಗೆದರತೊಡಗಿದವು,,
ತಾನೂ ಒಂದು ಮನೆಯನ್ನು ಕಟ್ಟಿಸಬೇಕು.., ಸಮಾಜದಲ್ಲಿ ಒಳ್ಳೆ ಸ್ಥಾನಮಾನಪಡೆಯಬೇಕು.., ಎಲ್ಲರೂ ಗೌರವಿಸುವಂತಾಗಬೇಕು..,
ಎಂದು ಆಸೆಯನ್ನು ಹೊತ್ತು 
ಅದೇ ರೀತಿ ತನ್ನ ಬದುಕನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಜಾಗ್ರತೆಯಿಂದ ಹೆಜ್ಜೆ ಇಡಹತ್ತಿದನು..
ಮೊದಲ ಬಾರಿಗೆ ಬ್ಯಾಂಕ್ ನಲ್ಲಿ ಉಳಿತಾಯ ಖಾತೆಯನ್ನು ಆರಂಭಿಸಿ ಸ್ವಲ್ಪ ಹಣವನ್ನೂ ಉಳಿಸಹತ್ತಿದನು....! (ಬಹಳ ಏನೂ ಅಲ್ಲ ದಿನಕ್ಕೆ ರೂ.ಇಪ್ಪತ್ತರಂತೆ ಮಾತ್ರ)
"ಮಾತನಾಡುವುದೇ ಸಾಧನೆಯಾಗದೇ, ಸಾಧನೆಯೇ ಮಾತನಾಡಬೇಕೆಂದು" ನಿರ್ಧರಿಸಿ.
ಮಾತು ಕಡಿಮೆ ಕೆಲಸ ಹೆಚ್ಚು ಎಂಬಂತಾಯಿತು..


ಹೀಗೆ ಸಾಗಿರುವಾಗ ಇವನಿಗೆ ೨೦ ವರ್ಷಗಳು ತುಂಬಿದ್ದವು..
ಅಕ್ಕ-ಪಕ್ಕದ ಮನೆಯವರು ಇವನ ತಂದೆಗೆ "ಏನಪ್ಪಾ..!!?? ಇನ್ನೇನು ಹುಡುಗ ವಯಸ್ಸಿಗೆ ಬಂದ ಮದುವೆ ಮಾಡೋದಿಲ್ವೇನು..??" ಎಂದರು. 
"ಅಯ್ಯೋ..!! ಈಗಿನ್ನೂ ವಯಸ್ಸು ಚಿಕ್ಕದು ಇನ್ನೂ ಸ್ವಲ್ಪ ದಿನ ಹೋಗಲಿ ಬಿಡಿ ನೋಡಿದರಾಯ್ತು" ಎಂದು ಉತ್ತರಿಸಿದರು ಇವನ ತಂದೆ.
ಅಲ್ಲಾ.. ಸ್ವಾಮಿ.., ನೀವು ಚೆಂದ ಹೇಳಿದ್ರಿ.. ಈಗ ನೋಡಿದ ಕೂಡಲೇ ಎಲ್ಲಾ ಆಗಿ ಹೋಗಿಬಿಡುತ್ತೇನು..,??
ನಮ್ಮ ಪ್ರಯತ್ನ ನಾವು ಮಾಡಬೇಕಲ್ಲವೇ..? ಈಗಿಂದ ಶುರು ಹಚ್ಚ್ಕೊಂಡ್ರೆ ಅಲ್ಲಿಗ್ ಬರುತ್ತೇ,, ಬೇಗ ಈಗಿಂದಲೇ ನೋಡೋಕ್ ಶುರುಮಾಡಿ ಎಂದರು.,
ಅದು ಸರಿನೇ.., ನೋಡೋಣ ಎಂದೇಳಿ ಮೌನವಾದರು ಶಿವು ತಂದೆ.


ಶಿವು ಮಧ್ಯಾಹ್ನ ಮನೆಗೆ ಊಟಕ್ಕೆ ಬಂದನು, 
ಊಟವಾದಮೇಲೆ ತಂದೆ ಇವನ ಬಳಿ ಬಂದು ಮದುವೆ ವಿಚಾರವನ್ನೆತ್ತಿದರು. 
ಶಿವಣ್ಣಾ...! ಎಲ್ರೂ ಹೀಗ್ ಹೇಳ್ತಾ ಇದ್ದಾರೆ,, ಮದ್ವೆ ಆಗೋಕೆ ನೀ ಸಿದ್ಧನಾ ಎಂದರು..?
ಒಂದು ಕ್ಷಣ ಇವನು ಗಲಿಬಿಲಿ ಗೊಂಡನು ಇವನು ತಿಳಿದ ಪ್ರಕಾರ ಮದುವೆಗೆ ಗಂಡಿಗೆ 21 ಹೆಣ್ಣಿಗೆ 18 ತುಂಬಿರಬೇಕು, ಆದರೆ ನನಗಿನ್ನೂ 20 ನಡೀತಾ ಇದೆ. ಇದೇನು ಇವರು ಈಗಲೇ ಮದ್ವೇ ಬಗ್ಗೆ ಮಾತಾಡ್ತಾ ಇದಾರೆ,
ಇನ್ನೂ ನಾನೊಂದು ಹಂತಕ್ಕೆ ಬೆಳೆದಿಲ್ಲ.,
ಹೆಂಡತಿಯನ್ನು ನೋಡಿಕೊಳ್ಳವ ಸಾಮಾರ್ಥ್ಯ ನನಗೆ ಬಂದಿದೆಯೇ..?
ಏನೇ ಆಗಲಿ ಈಗಲೇ ಮದ್ವೇ ಆಗಬಾರದೆಂದು ಆಲೋಚಿಸಿ,,!
"ಏನು..?? ಇಷ್ಟು ಬೇಗನಾ..? ನಂಗಂತೂ ಈಗ್ಲೇ ಮದ್ವೇ ಬೇಡ"ವೆಂದು ಹೇಳಿದನು..!
"ಅಲ್ಲೋ.., ತಮ್ಮಾ.., ಈಗಲೇ ಅಂತಾ ಅಲ್ಲ ಈಗ್ಲಿಂದ ಹೆಣ್ಣು ನೋಡೋಕೆ ಶುರು ಮಾಡಿದ್ರೆ ಅಲ್ಲಿಗೆ ಬರುತ್ತೆ,, 2-3 ವರ್ಷ ಆಗಬಹುದು ಎಂದರು ತಂದೆ.
ಅದಕ್ಕವನು.. "ಅದೇನೋ ಸರಿಯಯ್ಯಾ..,(ಅಪ್ಪನಿಗೆ ಅಯ್ಯ ಅಂತಾರೆ) ಆದ್ರೆ ನೋಡಿದ ಕೂಡಲೇ ಅವರು ಒಪ್ಪಿಬಿಟ್ರೆ ಹಾಗೇನ್ ಮಾಡ್ತೀರಿ ಎಂದನು..? 
ಏನೇ ಹೇಳಿ ನಾನಂತೂ ಈಗ್ಲೇ ಮದ್ವೆಗೆ ಒಪ್ಪಲ್ಲ" ಅಂದು ಬಿಟ್ಟನು..!
ಹೌದು..! ಅದೇನೋ ನಿಜಾನೇ ಎಂದರಿತು ಹೆಚ್ಚು ಒತ್ತಾಯ ಮಾಡದೇ ತಂದೆಯೂ ಸುಮ್ಮನಾಗಿಬಿಟ್ಟರು..!


(ಇಲ್ಲಿನ ಎಲ್ಲಾ ಚಿತ್ರಗಳ ಕೃಪೆ Google ನಿಂದ)
ದೇ ಮೊದಲ ಕ್ಷಣ ಇವನಲ್ಲಿ ನವಿರು ಭಾವನೆಗಳು ಅರಳಲನುವಾದವು..
ಹೌದಲ್ಲಾ..? ಮುಂದೆ ನಾನೂ ಮದ್ವೇಯಾಗೋನು..
ಹೇಗೆಲ್ಲಾ ಬಾಳಬೇಕು,, ಹೆಂಡತಿಯಾಗಿ ಬರೋಳ ಜೊತೆ ಹ್ಯಾಗೆಲ್ಲಾ ಇರಬೇಕು..?
ಈ ಮದುವೆ ಎಂದರೆ ಏನು..? ಯಾಕೆ..? ಅಂತೆಲ್ಲಾ ನೂರೆಂಟು ಯೋಚನೆಗಳನ್ನ ಮನದ ತುಂಬಾ ತುಂಬಿಕೊಂಡನು..!

ಮುಂದುವರಿಯುವುದು..............


ಇವತ್ತಿಗೆ ಇಷ್ಟು ಸಾಕಲ್ವ..? ಮತ್ತೆ ಸಿಗೋಣ...? 
ಅಂದ ಹಾಗೆ ಮರೆತಿದ್ದೆ..! ತಪ್ಪಿರಲಿ,, ಒಪ್ಪಿರಲಿ.. ನಿಮ್ಮ ಮನದಭಿಪ್ರಾಯವಿಲ್ಲಿ ತಪ್ಪದೇ ಮೂಡಿಬರಲಿ..! ಅಂದ್ರೇ Comment ಹಾಕೋದ್ ಮರೀಬ್ಯಾಡ್ರಿ ಅಂದೆ..! :)

ನಿಮ್ಮವ ♥ ♥ 
ಸವಿನೆನಪುಗಳು..!


ಭಾನುವಾರ, ನವೆಂಬರ್ 6, 2011

ಇಲ್ಲಿಂದ ಆರಂಭವೋ.....!! ♥ ♥



ದಿಹರೆಯದ ವಯಸಿನಲ್ಲಿ ನವ ತಾರುಣ್ಯಕ್ಕೆ ಅಡಿಯಿಡುವ ಸಂದರ್ಭದಲ್ಲಿ,

ಪ್ರತಿಯೋರ್ವರು ಒಂದಿಲ್ಲೊಂದು ರೀತಿಯಲ್ಲಿ ಪ್ರೀತಿಯ ಸಿಂಚನವನ್ನು ಪಡೆದೇ ಇರುತ್ತಾರೆ. 

ಒಬ್ಬೊಬ್ಬರದೂ ಒಂದೊಂದು ರೀತಿಯ ಪ್ರೇಮಕಥೆಯಾಗಿರುತ್ತದೆ.
ಕೆಲವು ಹೋಲಿಕೆಗಳಿರಬಹುದು,, ಇನ್ನೂ ಕೆಲವು ತುಂಬಾನೇ ವಿಭಿನ್ನವಾಗಿರುತ್ತವೆ. 
ಏನೇ ಆದರೂ., ಅವರವರ ಪ್ರೇಮಕಥೆ ಅವರವರಿಗೆ ವಿಭಿನ್ನವಾಗೇ,, ಶ್ರೇಷ್ಠವಾಗೇ ಕಾಣಿಸುತ್ತದೆ,
ಒಂದು ಪ್ರೀತಿಯು ಹುಟ್ಟಬೇಕಾದರೆ ಅದಕ್ಕೆ ಹಲವಾರು ಕಾರಣಗಳಿರುತ್ತವೆ. 
ಯಾವುದೋ ಒಂದು ಕಾರಣ ದಿಂದ.., ಯಾವುದೋ ಒಂದು ಸಂದರ್ಭದಲ್ಲಿ.., ಯಾವುದೋ ಒಂದು ಕ್ಷಣದಲ್ಲಿ.. 
ನಮಗರಿವಿಲ್ಲದೇ ನಮ್ಮ ಮನಸಲ್ಲಿ ಪ್ರೀತಿ ಮೊಳಕೆಯೊಡೆದು ಬಿಟ್ಟಿರುತ್ತದೆ, ,
ಅದು ಬೆಳೀತಾ.. ಬೆಳಿತಾ ಹಲವು ರೂಪಗಳಲ್ಲಿ ಅಭಿವ್ಯಕ್ತಿ ಗೊಳ್ಳುತ್ತಾ ಸಾಗುತ್ತದೆ.


ಒಂದು ರೀತಿಯಲ್ಲಿ ವಯೋಮಾನ ಸಹಜವಾದ ಆಕರ್ಷಣೆಯೇ ಪ್ರೀತಿಯ ಹುಟ್ಟಿಗೆ ಕಾರಣವಾಗಬಹುದು..

ಹದಿಹರೆಯದ ವಯಸಿನಾಕರ್ಷಣೆಗರಳಿದ ಪ್ರೇಮ ಫಲಿಸುವುದು ತುಂಬಾ ವಿರಳವೇ ಅನಿಸುತ್ತೆ.
ಸ್ವಲ್ಪ ಪ್ರಬುದ್ಧತೆಯ ಹಂತದಲ್ಲಿ ಹುಟ್ಟಿದ ಪ್ರೇಮ ಫಲಿಸುವ ಸಾಧ್ಯತೆ ಹೆಚ್ಚಿದ್ದರೂ ಕಾರಣಾಂತರಗಳಿಂದ ಅದರಲ್ಲೂ ವಿಫಲತೆಯ  ಅಂಶವನ್ನೂ ತಳ್ಳಿಹಾಕುವಂತಿಲ್ಲ..!  ಆದರೂ..,  ಪ್ರೀತಿ ಒಂದು ಮಾಯೆ ಎಂದುಕೊಳ್ಳುವವರೇ ಅತಿ ಹೆಚ್ಚು ಜನ,,!
ಇಷ್ಟಾದ್ರೂ ನನ್ನ ಒಂದು ಮಾತು ಅಂತೂ ಅಪ್ಪಟ ಸತ್ಯ 
"ಕಣ್ಣಲ್ ಹುಟ್ಟೋ ಪ್ರೀತಿ  'ಕಣ್ಮರೆ'ಯಾಗೋತನಕ..,
ಮನಸಲ್ಲ್ ಹುಟ್ಟೋ ಪ್ರೀತಿ 'ಹೃದಯದ ಬಡಿತ' ನಿಲ್ಲೋ ತನಕ" ♥ ♥


ಪ್ರೀತಿ-ಪ್ರೇಮಗಳಲ್ಲಿ ಸಿಲುಕಿದ ಪ್ರತಿಯೊಬ್ಬರೂ ಅದರ ಆಳ-ಅಗಲದ ಅನುಭವವೇನೆಂದು ಅರಿತಿರುತ್ತಾರೆ..
ಯಾರಾದರಾಗಲಿ ಈ ಪ್ರೀತಿಯ ಸುಳಿಯಲ್ಲಿ ಸಿಕ್ಕಿಹಾಕಿಕೊಂಡರೇ..
ಅದರಿಂದಾಚೆ ಬರುವುದು ಬಹು ಕಷ್ಟಸಾಧ್ಯವಾದ ಮಾತೇನೋ..?
ಪ್ರೀತಿಯ ಅಮಲಿನಲ್ಲಿರುವವರಿಗೆ ತಮ್ಮದೇ ಪ್ರೇಮಲೋಕ,,.
ಅಕ್ಕ-ಪಕ್ಕ., ಸುತ್ತ-ಮುತ್ತ.., ಯಾರಿಹರೆಂಬ ಪರಿವೇ ಇಲ್ಲದೇ
ತಮ್ಮದೇ ಕಲ್ಪನಾ ಕಲೋಕದಲ್ಲಿ ತೇಲಾಡುತ್ತಿರುತ್ತಾರೆ.. :)
ಊಟ.., ನಿದ್ರೆ.. ತಮ್ಮ ಕೆಲಸ..,ಇದಾವುದರ ಬಗೆಗೂ ಗಮನವಿರುವುದಿಲ್ಲ..
ಇನ್ನೂ ಹೆಚ್ಚೆಂದರೆ 'ಹಗಲು-ರಾತ್ರಿ'ಗಳಾದರೂ ಯಾವುದೆಂಬುದರರಿವು ಬಾರದೇ ಹೋಗಿಬಿಡುತ್ತದೆ..
ಏಕೆಂದರೆ.., ಪ್ರೀತಿಸುವ ಪ್ರೇಮಿಗಳಿಗೆ ಪ್ರತಿ ನಿತ್ಯ.. ಪ್ರತಿ ಕ್ಷಣ.., ಪ್ರೀತಿಸುತ್ತಿರುವವರದೇ ಧ್ಯಾನ..


"ಯಸಿದೊಲವು ಬಯಕೆಯಂತೆ ಜೊತೆಗೂಡಿ ಸಾಗಲು
ಪ್ರಜ್ವಲಿಸುವ ನೇಸರನ ಸುಡುಬಿಸಿಲಿನ ಕಿರಣಗಳೂ.,
ಸದಾ ತಂಪನ್ನೀಯುವ 'ಪೂರ್ಣಚಂದ್ರ'ನ ತಂಪು ಬೆಳದಿಂಗಳಿದ್ದಂತೆ"


ಒಂದೊಮ್ಮೆ ಇದೇ ಪ್ರೀತಿ ಕೈಗೆ ಸಿಗದೇ 'ನಿಲುಕದ ನಕ್ಷತ್ರ'ದಂತಾದರೆ..??
"ಬಯಸಿದೊಲವು ಬಯಕೆಯಂತೆ ಜೊತೆ ಬಾರದಿರಲು
ಸದಾ ತಂಪನ್ನೀಯುವ 'ಪೂರ್ಣಚಂದ್ರ'ನ ತಂಪು ಬೆಳದಿಂಗಳೂ ಸಹ
'ಪ್ರೇಮಿಗಳ ಪ್ರೇಮದ ವಿರಹದುರಿಯ ಯಾತನೆಗೆ'
ಝಗಮಗಿಸುವ ಕಡು ಬೇಸಿಗೆಯ ರವಿತೇಜನ ಕಿರಣಗಳಂತೆ
ಮೈ-ಮನ ಸುಡುವ ಬಿಸಿಲಿನಂತಾಗುತ್ತದೆ"

ಅದ್ಕೇ ಹೇಳೋದು ಪ್ರೀತಿ ಮಾಯೆ ಹುಷಾರು.., ಕಣ್ಣೀರ್ ಮಾರೋ ಬಜಾರು ಅಂತಾ.. :)


(ಇಲ್ಲಿನ ಎಲ್ಲಾ ಚಿತ್ರಗಳ ಕೃಪೆ Google ನಿಂದ)
ಲ್ಲೋ ಹುಟ್ಟಿ.., ಎಲ್ಲೋ ಬೆಳೆವ.. ಎರಡು ಹೃದಯಗಳ ಸಂಗಮವಾಗುವದಾದರೂ ಹೇಗೆ..??
ಈ ಹೃದಯ ಆ ಹೃದಯಕ್ಕೇ ಮೀಸಲು ಎಂಬ ಭಾವನೆ ಮೂಡುವದಾದರೂ ಹೇಗೆ..??
ಎಷ್ಟೋ ಕೋಟಿ ಕೋಟಿ ಜನರಿರುವ ಜಗದಲ್ಲಿ ನಿರ್ಧಿಷ್ಟವಾದ ಆ ಎರಡು ಹೃದಯಗಳ ನಡುವಿನ ಆಂತರಿಕ ಸೆಳೆತವೇನು..??
ಎತ್ತಣ ಮಾಮರ..? ಎತ್ತಣ ಕೋಗಿಲೆ..?  ಎಂಬ ಕವಿವಾಣಿಯಂತೆ ಇದಲ್ಲವೇ ಋಣಾನುಬಂಧ..??


ದೇ ಮಾದರಿಯಲ್ಲಿ ನನ್ನೀ ಕಥೆಯ ಎರಡು ಹೃದಯಗಳು ಹೇಗೆ ಸೇರುತ್ತವೆ..??
ಆ ಎರಡು 'ಹೃದಯಗಳ ಸಂಗಮ'ಕ್ಕೆ ನನ್ನೀ 'ಒಲವಿನಕ್ಷರಗಳ ಸೇತುವೆ' ಹೇಗಾಗುತ್ತೆ ಎಂಬುದ ಕಾದು ನೋಡಿ..!
ಓದಿ ಅನಂದಿಸಿ.., ಅನುಭವಿಸಿ.. ತಪ್ಪಿರಲಿ,, ಒಪ್ಪಿರಲಿ.. ನಿಮ್ಮ ಮನದಭಿಪ್ರಾಯವಿಲ್ಲಿ ತಪ್ಪದೇ ಮೂಡಿಬರಲಿ..

ಅಂದ ಹಾಗೆ ನಾನೀ ಕಥೆಯಲ್ಲಿ ಬಳಸುವ ವ್ಯಕ್ತಿಯ ಹೆಸರುಗಳಾಗಲಿ..,
ಕಥೆಯ ಸನ್ನಿವೇಶಗಳಾಗಲಿ.., ಕೇವಲ ಕಾಲ್ಪನಿಕ.
ಯಾರಿಗೂ.. ಯಾವುದಕ್ಕೂ ಸಂಬಂಧಪಟ್ಟಿರುವುದಿಲ್ಲ
ಹಾಗೊಂದು ವೇಳೆ ಹೋಲಿಕೆ ಕಂಡುಬಂದಲ್ಲಿ ಅದೊಂದು ಕಾಕತಾಳೀಯವಷ್ಟೇ. (Co Incidence)


ಮುಂದಿನ ಭಾಗದಲ್ಲಿ ಮತ್ತೆ ಸಿಗೋಣ.:) ಕಾಯ್ತಾ ಇರ್ತೀರಲ್ಲಾ..? ನಿಮ್ಮ Heart ಜೋಪಾನ..! 


ಪ್ರೋತ್ಸಾಹವಿರಲಿ.., 
ನಿಮ್ಮವ ♥ ♥ 
ಸವಿನೆನಪುಗಳು..!!